Slide
Slide
Slide
previous arrow
next arrow

ಶ್ರೀನಿಕೇತನ ಶಾಲೆಯಲ್ಲಿ ‘ಆನಂದ-ಆರೋಗ್ಯ ಶೈಕ್ಷಣಿಕ ಪ್ರಾತ್ಯಕ್ಷಿಕೆ’ ಯಶಸ್ವಿ

300x250 AD

ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಡಿಸೆಂಬರ್ 8, ಶುಕ್ರವಾರದಂದು ‘ಆನಂದ-ಆರೋಗ್ಯ ಶೈಕ್ಷಣಿಕ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆ. ಎಸ್. ಪವಿತ್ರಾ ಇವರನ್ನು ಸ್ವಾಗತಿಸಲಾಯಿತು. ಖ್ಯಾತ ಮನೋವೈದ್ಯೆ ಹಾಗೂ ನೃತ್ಯಗುರುಗಳಾದ ಇವರು ತಮ್ಮ ನೃತ್ಯ ಪ್ರದರ್ಶನದ ಮೂಲಕ ಅನೇಕ ಪೌರಾಣಿಕ ಘಟನೆಗಳನ್ನು ವಿವರಿಸಿದರು ಹಾಗೂ ಮಕ್ಕಳಿಗೆ ಮೌಲ್ಯ ಶಿಕ್ಷಣವನ್ನು ನೀಡುವ ಸಂದರ್ಭದಲ್ಲಿ ನೃತ್ಯರೂಪಕಗಳು ಬೀರುವ ಪ್ರಭಾವವನ್ನು ವರ್ಣಿಸಿದರು.
ಗಣೇಶ ಮತ್ತು ಕಾರ್ತಿಕೇಯರ ಮಧ್ಯೆ ಶ್ರೇಷ್ಠತೆಯ ಕುರಿತು ಏರ್ಪಟ್ಟ ಸ್ಪರ್ಧೆ, ತಮ್ಮ ಮಕ್ಕಳ ಪ್ರತಿ ತಾಯಿಯ ಭೇದ-ಭಾವವಿಲ್ಲದ ಪ್ರೀತಿ, ಭರತ ಮತ್ತು ಬಾಹುಬಲಿಯ ಮಧ್ಯೆ ಜರುಗಿದ ಯುದ್ಧ, ಇತ್ಯಾದಿ ಸನ್ನಿವೇಶಗಳನ್ನು ನಾಟ್ಯದ ಮೂಲಕ ಮಕ್ಕಳಿಗೆ ಪ್ರದರ್ಶಿಸಿ, ಕುಟುಂಬ ಸದಸ್ಯರ ಜೊತೆ ಮಕ್ಕಳ ಮನೋದೈಹಿಕ ಸಂಬಂಧಗಳು ಹಾಗೂ ಅವರ ಮಾನಸಿಕ ಆರೋಗ್ಯದ ವೃದ್ಧಿಯಲ್ಲಿ ನೃತ್ಯಗಳ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದರು.

300x250 AD

ಕಾರ್ಯಕ್ರಮದಲ್ಲಿ ಶ್ರೀನಿಕೇತನ ಶಾಲೆಯ ಕಾರ್ಯದರ್ಶಿ ಪ್ರೊ. ಕೆ. ಎನ್. ಹೊಸಮನಿ, ಶಾಲೆಯ ಪ್ರಾಂಶುಪಾಲರು ವಸಂತ್ ಭಟ್, ಆಡಳಿತ ಮಂಡಳಿಯ ನಿರ್ದೇಶಕರಾದ ಆರ್. ಎಸ್. ಹೆಗಡೆ, ಡಾ. ಕೇಶವ ಹೆಗಡೆ ಕೊರ್ಸೆ, ಪ್ರಶಾಂತ ಭಟ್, ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಡಿಂಪಲ್ ಆಚಾರಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಮತಿ ರಾಜಲಕ್ಷ್ಮಿ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top